Monday, October 29, 2007

ಓಂ ಶಾಂತಿ, ಸವಾರಿಯ ನಡುವೆ ಕದನ



ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆಯಲ್ಲಿ ಹಿಂದಿ ಚಿತ್ರರಂಗದ ದೊಡ್ಡ ತಾರೆ ಶಾರೂಕ್ ಖಾನ್. ಇನ್ನೊಂದು ದಿಕ್ಕಿನಲ್ಲಿ ಹಿಂದಿ ಸಿನೆಮಾದ ಮಹಾನ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಈ ವರ್ಷದ ದಿವಾಳಿಯಲ್ಲಿ ಇವರಿಬ್ಬರ ನಡುವೆ ಕದನವನ್ನು ಉದ್ಯಮದ ಹೊರಗೆ ಮತ್ತು ಒಳಗೆ ಕುತೂಹಲದಿಂದ ಜನರು ಗಮನಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅನೇಕ ದಿವಾಳಿ ಬಿಡುಗಡೆಯ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿವಾಳಿ ವಿಶೇಷ ಸಂದರ್ಭವಾಗಿದ್ದು, ಜನರು ಮನರಂಜನೆಗೆ, ಹಣ ಖರ್ಚು ಮಾಡಲು ಮತ್ತು ಮೋಜಿನಕೂಟಗಳಲ್ಲಿ ಕಳೆಯಲು ಆಶಿಸುತ್ತಾರೆ.ಓಂ ಶಾಂತಿ ಓಂ ಮತ್ತು ಸವಾರಿಯ ಚಿತ್ರಗಳು ದಿವಾಳಿ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಸುಲಭವಾಗಿ ಪಡೆಯಬಹುದು. ದಿವಾಳಿ ಹಬ್ಬದ ಸಂದರ್ಭದಲ್ಲಿ ಓಂ ಶಾಂತಿ ಓಂ ಮತ್ತು ಸವಾರಿಯ ಚಿತ್ರಗಳು ಚಿತ್ರೋದ್ಯಮಕ್ಕೆ ಕೋಟ್ಯಂತರ ರೂ. ಗಳಿಸಿಕೊಡಲಿ ಮತ್ತು ಬೆಳಕಿನ ಹಬ್ಬ ನವೆಂಬರ್‌ನಲ್ಲಿ ಚಿತ್ರೋದ್ಯಮವನ್ನು ಇನ್ನಷ್ಟು ಪ್ರಕಾಶಮಾನ ಮಾಡಲೆಂದು ಆಶಿಸೋಣ.

No comments: