Tuesday, January 29, 2008

"PUTTA" Designs

Pyramid Saimira is producing another new film directed by Omprakash Rao and starring Vijay of Duniya fame titled" PUTTA". The music will be by V. Manohar! The muhurt is to be held in the 1st week of Feb. It is an action packed film. Pyramid Saimira will be distributing the film.



ಮೆಗಾ ಸ್ಟಾರ್ ಚಿರಂಜೀವಿ ಚಿತ್ರನಿರ್ದೇಶಿಸುವ ಯೋಗ!


(ಕರ್ಟೆಸೀ: ವನ್ ಇಂಡೀಯಾ)
ಅವರೇ ಹೇಳುವ ಪ್ರಕಾರ ಯೋಗರಾಜ ಭಟ್ಟರು ಯಾರೂ ನಂಬಲಾರದಂಥ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಅವುಗಳಲ್ಲಿ ಒಂದು ಸ್ಯಾಂಪಲ್ಲು: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಚಿತ್ರವನ್ನು ನಿರ್ದೇಶಿಸುವುದು!
ಇದು ನಿಜವೇ? ಸ್ವತಃ ಯೋಗರಾಜ ಭಟ್ಟರು ಉತ್ತರಿಸುತ್ತಾರೆ: "ನಿಮ್ಮಾಣೆಗೂ ನಿಜ. ಇಂಥದ್ದೊಂದು ಆಫರ್ ಬಂದಾಗ ನಂಬಲಾಗಲಿಲ್ಲ. ಆದರೆ ಚಿರಂಜೀವಿಯವರಿಗೆ ತೀರಾ ಆಪ್ತರಾದ ಅಶ್ವಿನಿದತ್ ಅವರು ಆಫರ್ ನೀಡಿದಾಗ ನಂಬದಿರುವುದಾದರೂ ಹೇಗೆ ಸಾಧ್ಯ ನೀವೇ ಹೇಳಿ?" ಎಂದು ನಗುತ್ತಾರೆ ಭಟ್ಟರು.
ಆದರೆ ಭಟ್ಟರಿಗೆ ತಮ್ಮದೇ ಆದ ಆತಂಕವಿದೆ, ಜೊತೆಗೆ ಭಯವೂ ಇದೆ. "ಏಕೆಂದರೆ ಒಂದರ್ಥದಲ್ಲಿ ಚಿರಂಜೀವಿ ತನ್ನದೇ ಇಮೇಜ್ ಬೆಳೆಸಿಕೊಂಡಿರುವ ನಟ. ಇಂಥ ನಟನಿಗೆ ಹೀಗೆ ಮಾಡು ಅಂತ ನಿರ್ದೇಶನ ನೀಡುವುದು ನನ್ನಿಂದಾಗುವ ಕೆಲಸವಾ? ಇಷ್ಟಕ್ಕೂ ಅವರ ಇಮೇಜ್ ಗೆ ತಕ್ಕುದಾದ ಕಥೆ ಹುಡುಕಬೇಕು. ನಿರ್ದೇಶನ ನೀಡಬೇಕು. ಹೊಸಬರಾದರೆ ಹೇಗೆ ಬೇಕಾದರೂ ನಿರ್ದೇಶಿಸಬಹುದು. ಆದರೆ ಒಂದು ಇಮೇಜ್ ಬೆಳೆಸಿಕೊಂಡಿರುವ ಮಹಾ ನಟರ ಬಗ್ಗೆ ಹೀಗೆ ಎಂದು ಹೇಳಲಾಗದು" ಎಂದು ಹೇಳಿ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಾರೆ ಯೋಗರಾಜಭಟ್ಟರು.
ಆದರೂ ಅಶ್ವಿನಿದತ್ ಅವರ ಕಡೆಯಿಂದ ಒತ್ತಡ ಹೆಚ್ಚುತ್ತಿದೆ. 'ಗಾಳಿಪಟ' ಬಿಟ್ಟಾಗಿದೆ. ಮುಂದೇನು? ಚಿರಂಜೀವಿ ಚಿತ್ರನಾ? ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಪಡೆದು ಹಿಂತಿರುಗಿದ ಬಳಿಕ ಭಟ್ಟರ ಮುಂದಿನ ಹೆಜ್ಜೆಗಳನ್ನು ನೋಡುವಾ.

Wednesday, January 23, 2008

Pyramid Group's "Avva" film special review on "Kasturi Kannada" TV Channel

KASTURI KANNADA, regional channel in Karnataka has planned a one hour review on our film, “AVVA”.
Therefore,Director- Kavitha Lankesh, Leading Artists- Mrs.Shruthi Mahender and Vijay who play a pivotal role in the film, were interviewed.
Being Producer of the film, COO- Mr. SOMASEKHAR V.K, was also interviewed, on behalf of PYRAMID SAIMIRA GROUP.
IT IS SCHEDULED TO BE TELECAST ON SATURDAY (26/01/2008) From 4PM to 5PM.

ಗೋವಾ ಬೀಚ್‌ನಲ್ಲಿ ಆಕ್ಸಿಡೆಂಟ್

(ಕರ್ಟೆಸೀ: ವೆಬ್ ದುನಿಯಾ)

ಸುದ್ದಿಯ ತಲೆಬರಹ ನೋಡಿ ಗಾಬರಿಗೊಳ್ಳದಿರಿ. ಇದು ಆಕ್ಸಿಡೆಂಟ್ ಚಿತ್ರಕ್ಕೆ ಸಂಬಂಧಪಟ್ಟ ಸುದ್ದಿಯಷ್ಟೇ. ನಟ-ನಿರ್ದೇಶಕ ರಮೇಶ್ ಅರವಿಂದ್‌ರವರ ಆಕ್ಸಿಡೆಂಟ್ ಚಿತ್ರತಂಡ ಗೋವಾದಲ್ಲಿ ಬೀಡುಬಿಟ್ಟಿದೆ.
ಸುಂದರ ಬೀಚ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಅದರಲ್ಲಿ ರೇಖಾ, ಪೂಜಾಗಾಂಧಿ, ರಮೇಶ್, ಮೋಹನ್, ತಿಲಕ್ ಮೊದಲಾದವರೆಲ್ಲಾ ಪಾಲ್ಗೊಂಡಿದ್ದಾರೆ. ಸದ್ಯದಲ್ಲಿಯೇ ಸಮುದ್ರದ ನಡುಗಡ್ಡೆಯಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಎಲ್ಲರೊಂದಿಗೆ ಬೆರೆತು ನಗು ನಗುತ್ತಾ ಕೆಲಸ ತೆಗೆಯುವುದು ರಮೇಶ್‌ರವರ ಸ್ಟೈಲ್. ಹೀಗಾಗಿ ನಾವು ಇಲ್ಲಿ ಕೆಲಸ ಮಾಡಿದೆವು ಅನ್ನುವುದಕ್ಕಿಂತ ಪಿಕ್ನಿಕ್‌ಗೆ ಬಂದಿದ್ದೆವು ಎಂಬ ಅನುಭವವಾಗುತ್ತದೆ ಎಂದು ಹೇಳಿದವರು ಚಿತ್ರ ತಂಡದ ಕೆಲ ಸದಸ್ಯರು.
ಸದ್ಯದಲ್ಲಿಯೇ ಚಿತ್ರತಂಡ ಬೆಂಗಳೂರಿಗೆ ಮರಳಲಿದ್ದು, ಚಿತ್ರೀಕರಣದ ನಂತರದ ಕೆಲಸಗಳಿಗೆ ಚಾಲನೆ ಸಿಗಲಿದೆ.

Tuesday, January 22, 2008

ಗಾಳಿಪಟ: ಅಭಿನಯ, ಡೈಲಾಗ್‌ನಲ್ಲಿ ಗಣೇಶ


(ಕ‌ರ್ಟೆಸೀ: ವೆಬ್ ದುನಿಯಾ)


ನಿರ್ದೇಶಕ ಯೋಗರಾಜ ಭಟ್ಟರ ಬಹುನಿರೀಕ್ಷಿತ ಗಾಳಿಪಟ ಚಿತ್ರ ಬಿಡುಗಡೆಯಾಗಿದೆ. ಅವರ ಮುಂಗಾರು ಮಳೆ ಚಿತ್ರ ನೋಡಿದ ಪ್ರೇಕ್ಷಕನಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ, ಆದರೆ ಗಾಳಿಪಟದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಕಾರಣವೆಂದರೆ, ಮುಂಗಾರುಮಳೆಯ ಮೊದಲು ಮಣಿ ಮತ್ತು ರಂಗ ಎಸ್ಸೆಸ್ಸೆಲ್ಸಿ ಚಿತ್ರಗಳು ಸೋತಿದ್ದವು. ಈಗ ಮುಂಗಾರುಮಳೆ ಎಂಬ ಗೆದ್ದ ಚಿತ್ರದ ನಂತರ ಅವರು ಮತ್ತೊಂದು ಚಿತ್ರ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಸಹಜ.
ಗಾಳಿಪಟ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಮುಂಗಾರುಮಳೆಯ ಗುಂಗಿನಲ್ಲೇ ಬರುತ್ತಾನೆ. ಅದೇ ಬೇರೆ, ಇದೇ ಬೇರೆ ಎಂದು ಯೋಗರಾಜ ಭಟ್ಟರು ಎಷ್ಟೇ ಹೇಳಿದರೂ ಈ ಹ್ಯಾಂಗೋವರ್ ತಪ್ಪಿದ್ದಲ್ಲ ಎಂಬುದು ಸತ್ಯ. ಅದಕ್ಕೆ ಪುಷ್ಟಿ ನೀಡುವಂತೆ ಮಳೆ, ಗಾಳಿ, ಹಸಿರು, ಅದೇ ಶೈಲಿಯ ಡೈಲಾಗ್‌ಗಳು ಗಾಳಿಪಟದಲ್ಲೂ ಕಾಣಿಸಿಕೊಂಡಿದೆ. ಈ ದೃಷ್ಟಿಯಿಂದ ನೋಡುವುದಾದರೆ ಯೋಗರಾಜ ಭಟ್ಟರಿಗೇ ಇನ್ನೂ ಮುಂಗಾರು ಮಳೆಯ ಹ್ಯಾಂಗೋವರ್ ಹೋಗಿಲ್ಲ ಎನ್ನಬೇಕು!!
ಇದನ್ನೆಲ್ಲಾ ಪಕ್ಕಕ್ಕಿಟ್ಟು ನೋಡುವುದಾದರೆ ಗಾಳಿಪಟ ಒಂದು ಸುಂದರ ಚಿತ್ರ. ಮುಂಗಾರು ಮಳೆಗಿಂತ ಚೆನ್ನಾಗಿದ್ಯಾ? ಅಂತ ನೀವು ಕೇಳ್ಬಾರ್ದು ಅಷ್ಟೇ. ಚಿತ್ರದ ಪಾತ್ರಧಾರಿಗಳನ್ನು, ಛಾಯಾಗ್ರಾಹಕನನ್ನು, ತಂತ್ರಜ್ಞರನ್ನು ಹೀಗೂ ಬಳಸಿಕೊಳ್ಳಬಹುದಾ ಎಂಬ ಪ್ರಶ್ನೆಗೆ ಗಾಳಿಪಟ ಉತ್ತರ ನೀಡುತ್ತದೆ ಎಂದು ಧೈರ್ಯವಾಗಿ ಹೇಳಬಹುದು. ಆದರೆ ತಮ್ಮ ಕಥೆಯನ್ನು ಹೇಳುವಲ್ಲಿ ಅವರು ಗಣೇಶ್‌ಗಷ್ಟೇ ಹೆಚ್ಚಿನ ಒತ್ತು ನೀಡಿರುವುದು ಅವರ ಅನಿವಾರ್ಯತೆಯೋ, ಉದ್ಯಮದ ಅಗತ್ಯತೆಯೋ ಅಥವಾ ಪ್ರೇಕ್ಷಕನ ನಿರೀಕ್ಷೆಯೋ ಎಂಬುದನ್ನು ಸ್ವತಃ ಯೋಗರಾಜ ಭಟ್ಟರಷ್ಟೇ ಹೇಳಬಲ್ಲರು.
ಗಣೇಶೋತ್ಸವ ಮತ್ತೆ ಮುಂದುವರಿಯುವ ಸೂಚನೆ ಗಾಳಿಪಟದಲ್ಲಿ ಸ್ಪಷ್ಟವಾಗಿ ಸಿಕ್ಕಿದೆ. ಈ ಹಿಂದಿನ ಅವರ ಚಿತ್ರಗಳೆಲ್ಲವೂ ಸೂಪರ್ ಹಿಟ್. ಒಂದು ಅವಧಿಯಲ್ಲಂತೂ ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ ಅವರ ಮುಂಗಾರು ಮಳೆ ಪ್ರದರ್ಶಿತವಾಗುತ್ತಿದ್ದರೆ, ಇತ್ತ ಅಪರ್ಣಾದಲ್ಲಿ ಹುಡುಗಾಟ, ಅತ್ತ ಕಪಾಲಿಯಲ್ಲಿ ಚೆಲುವಿನ ಚಿತ್ತಾರ ಚಿತ್ರಗಳು ಕಿಕ್ಕಿರಿದ ಜನಸಂದಣಿಯಲ್ಲಿ ಪ್ರದರ್ಶನ ಕಾಣುತ್ತಿದ್ದವು. ಒಂದು ರೀತಿಯಲ್ಲಿ ಅದು ಗಣೇಶೋತ್ಸವವೇ ಆಗಿತ್ತು. ಗಾಳಿಪಟ ಚಿತ್ರದಲ್ಲಿ ಗಣೇಶ್ ಅಭಿನಯ, ಡೈಲಾಗ್ ಡೆಲಿವರಿ, ಚುರುಕುತನ, ಪಾತ್ರದ ರೂಪುರೇಷೆಗಳನ್ನೆಲ್ಲಾ ಗಮನಿಸಿದರೆ ಹಾಗೂ ಪ್ರೇಕ್ಷಕ ಪ್ರಭುಗಳಿಂದ ಅದಕ್ಕೆ ಸಿಗುತ್ತಿರುವ ಪ್ರೋತ್ಸಾಹವನ್ನು ಗಮನಿಸಿದರೆ ಗಣೇಶೋತ್ಸವ ಮುಂದುವರಿಯುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
ಚಿತ್ರದ ಕಥೆ ಮತ್ತು ಚಿತ್ರಕಥೆ ತುಂಬಾ ಸಿಂಪಲ್. ಬೆಂಗಳೂರಿನ ಏಕತಾನತೆಯಿಂದ ಬೋರಾಗಿ ಮೂವರು ಶ್ರೀಮಂತ ಗೆಳೆಯರು ಮುಗಿಲುಪೇಟೆ ಎಂಬ ಊರಿಗೆ ಆಗಮಿಸುತ್ತಾರೆ. ಅಲ್ಲಿನ ತಾತನ ಮನೆಯಲ್ಲಿರುವ ಮೂವರು ಹೆಣ್ಣುಮಕ್ಕಳ ಮನ ಗೆಲ್ಲಲು ಯತ್ನಿಸುವುದು, ಅದರಲ್ಲಿ ವೈಫಲ್ಯ-ಸಾಫಲ್ಯ ಮೊದಲಾದ ಸರ್ಕಸ್‌ಗಳು ಚಿತ್ರದ ಹೂರಣ. ಇದಕ್ಕೆ ಹಾಸ್ಯ-ಪಂಚಿಂಗ್ ಡೈಲಾಗ್-ರಮ್ಯ ಹೊರಾಂಗಣ-ಹಾಡುಗಳ ರೆಕ್ಕೆಪುಕ್ಕವನ್ನು ಕಟ್ಟಿರುವುದು ಯೋಗರಾಜ ಭಟ್ಟರ ವೈಶಿಷ್ಟ್ಯ. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಇದರಲ್ಲಿ ಅವರಿಗೆ ಸಾಥ್ ನೀಡಿರುವುದು ಕ್ಯಾಮೆರಾಮನ್ ರತ್ನವೇಲು ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ.
ಅಭಿನಯದ ವಿಷಯಕ್ಕೆ ಬರುವುದಾದರೆ, ಗಣೇಶ್ ಈಸ್ ಸಿಂಪ್ಲೀ ಗ್ರೇಟ್. 'ಆತನೊಬ್ಬ ಅಭಿನಯ ರಕ್ಕಸ' ಎಂದು ಪ್ರೀತಿಪೂರ್ವಕವಾಗಿ ಬಯ್ಯುವಷ್ಟು ಚುರುಕಾಗಿ ಗಣೇಶ್ ಅಭಿನಯಿಸಿದ್ದಾರೆ. ಅಪ್ಪಟ ತಿಂಡಿಪೋತ, ಮಾತಿನಮಲ್ಲನಾಗಿ ಅಭಿನಯಿಸಿರುವ ಗಣೇಶ್‌ಗೆ ಇಂಥಾ ಪಾತ್ರಗಳು ವೃತ್ತಿ ಜೀವನಕ್ಕೆ ಒಳ್ಳೆಯ ಬುನಾದಿಯನ್ನು ಕೊಡಬಲ್ಲವು. ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಪಾತ್ರಗಳ ಪಾತ್ರ ಪೋಷಣೆ ಇನ್ನೊಂದಿಷ್ಟು ಆಗಬೇಕಿತ್ತು ಎಂದು ಅಲ್ಲಲ್ಲಿ ಅನಿಸುತ್ತದೆಯಾದರೂ ಅದೇನೂ ಕೊರತೆಯಲ್ಲ.
ಮತ್ತಿನ್ನೇನು ಹೇಳುವುದು? ಒಮ್ಮೆ ಚಿತ್ರಮಂದಿರಕ್ಕೆ ಹೋಗಿ 'ಗಾಳಿಪಟ' ಹಾರಿಸಿಬನ್ನಿ ಎಂದು ಹೇಳಬಹುದು, ಅಷ್ಟೇ!

Wednesday, January 16, 2008

Brothers come together

(Courtesy: Metro Plus, The Hindu)

ಇಂದ್ರನ ಗಮ್ಮತ್ತಿನಲ್ಲಿ ದರ್ಶನ್

(ಕ‌ರ್ಟೆಸೀ: ವೆಬ್ ದುನಿಯಾ)

ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂಬ ತುಡಿತ ಇರುವುದರ ಜೊತೆಗೆ ದ್ವಿಪಾತ್ರಾಭಿನಯವೂ ಕೆಲವರ ಆಸೆಯಾಗಿರುತ್ತದೆ. ಅಂಥಾ ಆಸೆಯನ್ನು ದರ್ಶನ್ ಇಂದ್ರ ಚಿತ್ರದ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ.
ಎ.ಕುಪ್ಪುಸ್ವಾಮಿ ಹಾಗೂ ಸುರೇಶ್ ಚೌಧರಿ ನಿರ್ಮಾಣದ ಈ ಚಿತ್ರದ ಹಾಡುಗಳ ಚಿತ್ರೀಕರಣ ಸ್ವಿಜರ್ಲ್ಯಾಂಡ್ ಹಾಗೂ ಬ್ಯಾಂಕಾಕ್‌ಗಳಲ್ಲಿ ನಡೆದಿದೆ. ಇದನ್ನು ಹೊರತುಪಡಿಸಿ ಬೆಂಗಳೂರು, ಮೈಸೂರು, ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದು ಚಿತ್ರತಂಡದ ವಿವರಣೆ.
ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯವಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಬಿ.ಎ.ಮಧು ಸಂಭಾಷಣೆ ರಚಿಸಿದ್ದಾರೆ. ನಮಿತಾ, ರಮೇಶ್‌ ಭಟ್, ಸತ್ಯಜಿತ್, ಬುಲೆಟ್ ಪ್ರಕಾಶ್ ಮೊದಲಾದವರ ತಾರಾಗಣವಿರುವ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ಸಾಂಘವಿಯವರು ನಟಿಸುತ್ತಿರುವುದು ಚಿತ್ರದ ಕುರಿತಾದ ಕುತೂಹಲವನ್ನು ಹೆಚ್ಚಿಸಿದೆ.

Monday, January 14, 2008

ಅಪಚಾರ: "ಹನುಮಾನ್..." ಚಿತ್ರ ತಂಡದ ವಿರುದ್ಧ ಕೇಸು


(ಕ‌ರ್ಟೆಸೀ: ವೆಬ್ ದುನಿಯಾ)
"ಹನುಮಾನ್ ರಿಟರ್ನ್ಸ್" ಚಿತ್ರದಲ್ಲಿ ಹನುಮದೇವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಲ್ಲಿ ಚಿತ್ರ ನಿರ್ದೇಶಕ ವಿ.ಜಿ.ಸಾಮಂತ್ ಹಾಗೂ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಸೇರಿದಂತೆ ಆರು ಮಂದಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ದೂರಿನ ಅರ್ಜಿ ಸ್ವೀಕರಿಸಿರುವ ನ್ಯಾಯಾಧೀಶ ಪ್ರದೀಪ್ ಸೋನಿ, ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಪಡಿಸಿದ್ದಾರೆ. ಚಿತ್ರದಲ್ಲಿ ಹನುಮಾನ್ ದೇವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರ ಪ್ರಕಾಶ್ ಕುಮಾರ್ ಆರೋಪ.
ಚಿತ್ರದಲ್ಲಿ ಹನುಮಂತನು ಗಬ್ಬರ್ ಸಿಂಗ್ ಜತೆಗೆ ಅಸಭ್ಯವಾಗಿ ಮಾತನಾಡುವ ಸನ್ನಿವೇಶವಿದೆ. ಮಾತ್ರವಲ್ಲದೆ ಇಂದ್ರ ಮುಂತಾದ ಹಲವಾರು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳು ಇದರಲ್ಲಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ, ವಿತರಕ ಮತ್ತು ಚಿತ್ರವನ್ನು ಇಂಟರ್ನೆಟ್‌ನಲ್ಲಿ ಪ್ರಕಟಿಸಿರುವ ಕಂಪನಿಗಳು ಹಾಗೂ ಚಿತ್ರಕ್ಕೆ ಅನುಮತಿ ನೀಡಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Saturday, January 12, 2008

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್

(ಕ‌ರ್ಟೆಸೀ: ವ‌ನ್ ಇಂಡಿಯಾ)

ಹಲವಾರು ಚಿತ್ರಗಳು ಬಿಡುಗಡೆಯಾದ ಮೇಲೂ ಪುನೀತ್ ಅಭಿನಯದ 'ಮಿಲನ' ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎಲ್ಲದಕ್ಕಿಂತಲೂ ಮುಂದಿದೆ. ಈಗಾಗಲೇ ಸಿಲ್ವರ್ ಜ್ಯೂಬಿಲಿ ಆಚರಿಸುತ್ತಿರುವ 'ಮಿಲನ' ಚಿತ್ರ ಶತದಿನೋತ್ಸವದ ನಂತರ, ಕೆಲ ದಿನ ಚಿತ್ರಮಂದಿರಗಳ ಗೊಂದಲದಿಂದ ಪ್ರದರ್ಶನದಲ್ಲಿ ವ್ಯತ್ಯಯವುಂಟಾಗಿತ್ತು. ಮೆಜೆಸ್ಟಿಕ್ ಚಿತ್ರಮಂದಿರ ಲಾಕೌಟಾದನಂತರ ಮೇನಕಾಗೆ ಹಾಕಿದ ಮೇಲೂ ಚಿತ್ರಕ್ಕೆ ಜನಸಾಗರ ಹರಿದು ಬರುತ್ತಲೇ ಇದೆ. ಕೌಟುಂಬಿಕ ಹಿನ್ನೆಲೆಯ ಚಿತ್ರ, ಪುನೀತ್ ಹಾಗೂ ಪಾರ್ವತಿ ಅಭಿನಯ, ಮನೋಮೂರ್ತಿ ಸಂಗೀತ, ಕಾಯ್ಕಿಣಿ ಸಾಹಿತ್ಯದ ಜೊತೆಗೆ ಪ್ರಕಾಶ್ ಅವರ ನಿರ್ದೇಶನ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡನೇ ಸ್ಥಾನದಲ್ಲಿ ವಿಷ್ಣುವರ್ಧನ್ ಹಾಗೂ ಜಯಪ್ರದಾ ಅಭಿನಯದ ಹಿಂದಿ 'ಬಾಗಬನ್' ಚಿತ್ರದ ರಿಮೇಕ್ 'ಈ ಬಂಧನ' ಚಿತ್ರ ಹೆಂಗಳೆಯರ ಮನೆ ಸೂರೆಮಾಡುವಲ್ಲಿ ಯಶಸ್ವಿಯಾಗಿದೆ. ಪ್ರಥಮಬಾರಿಗೆ ನಿರ್ದೇಶನಕ್ಕೆ ಇಳಿದಿರುವ ವಿಜಯಲಕ್ಷ್ಮಿ ಸಿಂಗ್ ಅವರ ನಿರ್ದೇಶನದಲ್ಲಿ ಹಲವು ಹುಳುಕುಗಳಿದ್ದರೂ, ಜನ ನಿಧಾನವಾಗಿ ಮೆಚ್ಚುಗೆ ಸೂಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲೇ ದಾಖಲೆ ಪ್ರಮಾಣದ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ, ಬಹು ನಿರೀಕ್ಷಿತ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ' ಹಣಗಳಿಕೆಯಲ್ಲಿ ಭಾರಿ ಹಿನ್ನೆಡೆ ಕಂಡಿದೆ. ಟಿವಿ ಮಾಧ್ಯಮಗಳ ಪ್ರಚಾರ, ಸುಳ್ಳು ವಿವಾದ ಸೃಷ್ಟಿಸಿದ ಅಪಪ್ರಚಾರದ ಹೊರತಾಗಿಯೂ ಪ್ರೇಮ್ ಲೆಕ್ಕಾಚಾರ ತಲೆಕೆಳಗಾಗಿದೆ. ಅಭಿಮಾನಿಗಳ ಬಲದಿಂದ ಮೊದಲ ವಾರ ಉತ್ತಮ ಗಳಿಕೆ ಕಂಡಿದ್ದ 'ಪ್ರೀಏಭೂಮೇ' ನಂತರದ ವಾರದಲ್ಲಿ ಕುಸಿದು ಪ್ರೇಮ್ ನಿರೀಕ್ಷೆ ಹುಸಿಮಾಡಿದೆ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ಅವರ 'ಕೃಷ್ಣ' ಚಿತ್ರ ಶತದಿನೋತ್ಸವದ ನಂತರವೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಗಣೇಶ್ ಅಭಿನಯ, ಪೂಜಾ ಗಾಂಧಿ ಕುಣಿತ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಣಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ನಡುವಿನ ವಾಗ್ವಾದದ ಲಾಭ ಪಡೆದ 'ಚಂಡ' ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿವಾದದಿಂದ ಬಿಗುಮುಖಿಯಾಗಿದ್ದ ನಾರಾಯಣ್ ಮೊಗದಲ್ಲಿ ಮತ್ತೆ ಅವರ ಟ್ರೇಡ್ ಮಾರ್ಕ್ ನಗು ಪ್ರತ್ಯಕ್ಷವಾಗಿದೆ. ಈ ಚಿತ್ರ ಕೊನೆಗೂ ಯಶಸ್ಸಿನ ಹಾದಿ ಹಿಡಿದಿದೆ. ಚಿತ್ರ ವಿತರಕರಿಗೂ ಸಾಕಷ್ಟು ಹಣ ಗಳಿಸಿಕೊಟ್ಟಿದೆ.

Friday, January 11, 2008

“HALLABOL” pyramid Saimira Production, proudly presents its one of the best productions to the audience this week

PSTL- Karnataka arranged a trade show of the film, “Halla Bol” in GM Rejoyz preview theatre, Bangalore at 6.30 pm. It witnessed a maximum number of film personalities from Kannada industry. Mr. Ramesh Aravind, Actor and Director, Mr. Sunil Kumar Desai, Director, Mrs. Shruthi Mahender, actress along with her husband Mr. Mahender, also a Director, Mr. Dwarkish, film actor, producer and Director in the industry, Mr. Naganna, Director, Mr.Shriram, Producer, and his partner Mr. Kumar, Mr. Paras Jain, Producer, Mr. Babji- Exhibitor (Padma, hubli & Karnataka- Gadag), Mr. Raghunath, a software engineer who has recently produced a movie “Accident” with Ramesh Aravind in the lead.Some of the reactions heard were“The film is superb, it has all the essence which will pull the crowd into the theatre. In the first half though it goes bit slow, it picks up the pace in the second half. Very well planned and executed movie. Overall a nice film, which is very much relevant to the current situation of the society” says Ramesh Aravind. Film is good and very well made said Mahender. Dwarkish says, “a good film” where as Shruthi says, “nicely made movie”.The film has raised curiosity in everyone who was present in the trade show.A very well made movie, which is expected to give Ajay Devgan, a new image in his career, says the industry people.





ಪುನೀತ್ ರಾಜ್ ಕಪೂರ್ ಅಭಿನಯದ ಬಿಂದಾಸ್ ಕಡೆಗೆ ಎಲ್ಲರ ಕಣ್ಣು


(ಕ‌ರ್ಟೆಸೀ: ವೆಬ್ ದುನಿಯಾ)
ಪುನೀತ್ ಅಭಿನಯದ ಬಿಂದಾಸ್ ಚಲನಚಿತ್ರ ಹಲವು ನೀರೀಕ್ಷೆಗಳನ್ನು ಹುಟ್ಟುಹಾಕಿದೆ. ಹಲವು ಅಪರೂಪದ ಪ್ರತಿಭೆಗಳು ಈ ಚಿತ್ರದಲ್ಲಿ ಮೇಳೈಸಿರುವುದೇ ಇದಕ್ಕೆ ಕಾರಣ. ಮಿನಿಮಮ್ ಗ್ಯಾರಂಟಿ ನಿರ್ದೇಶಕರೆಂದೇ ಹೆಸರಾದ ಡಿ.ರಾಜೇಂದ್ರಬಾಬು ನಿರ್ದೇಶನದಲ್ಲಿ ಪುನೀತ್ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದು ಇವರಿಗೆ ನಾಯಕಿಯಾಗಿರುವಾಕೆ ಬಾಲಿವುಡ್ ಚೆಲುವೆ ಹನ್ಸಿಕಾ. ಹನ್ಸಿಕಾ ಎಂದರೆ ಪ್ರಾಯಶಃ ಕೆಲವರಿಗೆ ಗೊತ್ತಾಗುತ್ತದೋ ಇಲ್ಲವೋ; ಅದರೆ ಅರುಣಾ ಇರಾನಿ ನಿರ್ದೇಶನದ ದೇಸ್ ಮೇ ನಿಕಲಾ ಹೋಗಾ ಚಾಂದ್ ಎಂದರೆ ಈ ಪ್ರತಿಭೆಯ ನೆನಪಾಗುತ್ತದೆ. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಬಾಲನಟಿಯಾಗಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವರು ಹನ್ಸಿಕಾ. ಎಳೆಗರುಂ ಎತ್ತಾಗದೇ ಲೋಕದೊಳ್..? ಎಂದು ಕವಿ ಸೋಮೇಶ್ವರ ಪ್ರಶ್ನಿಸಿರುವಂತೆ ಅಂದು ಬಾಲನಟಿಯಾಗಿದ್ದವಳು ಇಂದು ತನ್ನ ಪಾತ್ರಕ್ಕೆ 36 ಲಕ್ಷ ರೂ.ಗಳನ್ನು ಡಿಮ್ಯಾಂಡ್ ಮಾಡುವ ಮಟ್ಟಿಗೆ ಬೆಳೆದಿದ್ದಾಳೆ ಎಂದರೆ ಅದು ಹೆಮ್ಮೆ ಪಡುವ ವಿಷಯವೇ. ಇನ್ನು ಪುನೀತ್ ವಿಷಯಕ್ಕೆ ಬರುವುದಾದರೆ ಈ ಚಿತ್ರದ ಕುರಿತಾದ ಅವರ ಬದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಈ ನಡುವೆ ಅವರಿಗೆ ಯೋಗರಾಜ ಭಟ್ಟರಿಂದ ಗಾಳಿಪಟ ಚಿತ್ರಕ್ಕೆ ಆಫರ್ ಬಂದಿತ್ತು. ಅದರೆ ಬಿಂದಾಸ್ ಬಿಡುಗಡೆಗೆ ಕ್ಲಾಶ್ ಆಗುತ್ತದೆ ಎಂಬ ಒಂದೇ ಕಾರಣದಿಂದ ಗಾಳಿಪಟ ಹಾರಿಸಲು ಪುನೀತ್ ಒಪ್ಪಲಿಲ್ಲ ಎಂಬುದು ಈಗಾಗಲೇ ಪ್ರಚಲಿತದಲ್ಲಿರುವ ಸುದ್ದಿ. ಜೊತೆಗೆ ಪುನೀತ್ ಚಿತ್ರಗಳು ಅವುಗಳ ನಿರೂಪಣೆಯಿಂದ, ಅಭಿನಯದಿಂದ ಹಾಗೂ ಹಾಡುಗಳಿಂದ ಎಲ್ಲರ, ಅದರಲ್ಲೂ ಹೆಂಗೆಳೆಯರ ಮನಸೂರೆಗೊಳ್ಳುತ್ತಿವೆ. ಇತ್ತೀಚಿನ ಅವರ ಅರಸು, ಮಿಲನ ಚಿತ್ರಗಳ ಯಶಸ್ಸು ಎಲ್ಲರ ಕಣ್ಣೆದುರಲ್ಲೇ ಇರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಬಿಂದಾಸ್ ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆ.

Thursday, January 10, 2008

'ಕ್ರೇಜಿ 4'ನಲ್ಲಿ ಐಟಂ ಬಾಯ್ ಆಗಿ ಹೃತಿಕ್ ರೋಶನ್


(ಕ‌ರ್ಟೆಸೀ: ವೆಬ್ ದುನಿಯಾ)
ಮೊದಲ ಬಾರಿಗೆ ತನ್ನ ಪುತ್ರ ಹೀರೋ ಆಗಿ ನಟಿಸದ ರಾಕೇಶ್ ರೋಶನ್ ಅವರ ಕಾಮಿಡಿ ಚಿತ್ರ 'ಕ್ರೇಜಿ 4'ನಲ್ಲಿ ತನ್ನ ಮೊಣಕಾಲು ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹೃತಿಕ್ ಅಭಿನಯಿಸಲು ಸಿದ್ಧರಾಗಿದ್ದಾರೆ. ಎರಡು ವಾರಗಳ ಹಿಂದೆ ಸಿಂಗಾಪುರದಿಂದ ಮರಳಿದ್ದ ಹೃತಿಕ್ ಈಗ ಆಸ್ಟ್ರೇಲಿಯಾದಲ್ಲಿ ಗುಣಮುಖ ಹೊಂದುತ್ತಿದ್ದಾರೆ. ರಾಜಾ ಸೇನ್ ನಿರ್ದೇಶಿಸುತ್ತಿರುವ 'ಕ್ರೇಜಿ 4' ಹಾಸ್ ಚಿತ್ರದಲ್ಲಿ ಐಟಂ ಬಾಯ್ ಆಗಿ ಹೃತಿಕ್ ಕಾಣಿಸಿಕೊಳ್ಳಲಿದ್ದು,ಇದರಲ್ಲಿ ಆರ್ಶದ್ ವಾರ್ಸಿ, ಇರ್ಫಾನ್ ಖಾನ್, ಸುರೇಶ್ ಮೆನನ್ ಮತ್ತು ರಾಜ್‌ಪಾಲ್ ಯಾದವ್ ತಾರಾಗಣವಿಗದೆ. ಹೃತಿಕ ಇಲ್ಲದೆ ನಾನು ಹೇಗೆ ಚಿತ್ರ ಮಾಡುತ್ತೇನೆ ಎಂದು ಪ್ರೇಕ್ಷಕರು ಯಾವತ್ತೂ ಆಶ್ಚರ್ಯಪಡುತ್ತಿದ್ದರು.ಈ ಚಿತ್ರದಲ್ಲಿ ಹೃತಿಕ್ ಅವರು ತನ್ನ ವೃತ್ತಿ ಜೀವನದ ಮೊದಲ ಐಟಂ ಸಾಂಗ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ರಾಕೇಶ್ ರೋಶನ್ ಹೇಳಿದರು. ಚಿತ್ರದ ಹಾಡುಗಳನ್ನು ನನ್ನ ಸಹೋದರ ರಾಜೇಶ್ ರೋಶನ್ ಈಗಾಗಲೇ ರೆಕಾರ್ಡ್ ಮಾಡಿದ್ದು, ಇದನ್ನು ಮಾರ್ಚ್ 2008ರಲ್ಲಿ ಚಿತ್ರೀಕರಣ ನಡೆಸಲು ನಾನು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ. ಒಂದು ವೇಳೆ ಹೃತಿಕ‌ಗೆ ಮೊಣಕಾಲು ನೋವಿದ್ದಲ್ಲಿ ಹಾಡನ್ನು ಚಿತ್ರೀಕರಣ ಮಾಡುವುದಿಲ್ಲ ಎಂದು ಕಾಳಜಿಯುಕ್ತ ತಂದೆ ಹೇಳಿದರು. ರೋಶನ್ ಅವರು ನಿರ್ದೇಶಕ ವೃತ್ತಿಯಿಂದ ದೀರ್ಘ ರಜೆಯನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು, ಅದಕ್ಕೂ ಮೊದಲು ತನ್ನ ನೂತನ ಚಿತ್ರವೊಂದು ಜುಲೈ 2008ರಲ್ಲಿ ಪ್ರಾರಂಭವಾಗಲಿದ್ದು, ಅದರಲ್ಲಿ ಹೃತಿಕ ಈ ಮೊದಿಗಿಂತಲೂ ವಿಶಿಷ್ಟವಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.