Saturday, October 13, 2007

ಸಾಹಸಸಿಂಹ ವಿಷ್ಣುವರ್ಧನ್‌




ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರಿಂದ ಕನ್ನಡ ಚಿತ್ರರಂಗ ಶ್ರೀಮಂತವಾಗಿದೆ.
ಚಿತ್ರರಸಿಕರಿಗಾಗಿ ಅವರು ನೀಡಿದ ಅನೇಕ ಚಿತ್ರಗಳಲ್ಲಿ ಇನ್ನು ಕೇಲವೊಂದು ಅಷ್ಟೆ ನಿತ್ಯ ನೂತನ ಬಂಧನ, ನಿಷ್ಕರ್ಷ,ಮಲಯ ಮಾರುತ, ಸುಪ್ರಭಾತ, ಮುತ್ತಿನ ಹಾರ, ಸೂರ್ಯವಂಶ, ಮತ್ತು ಮೊನ್ನೆ ಬಿಡುಗಡೆಯಾಗಿದೆ ಅನ್ನಬಹುದಾದ ವೀರಪ್ಪ ನಾಯಕ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಬಹುದು.
ವಿಷ್ಣು ಅಭಿನಯಿಸಿದ ಹರಕೆಯ ಕುರಿ ಮತ್ತು ಮುತ್ತಿನ ಹಾರ ಚಿತ್ರಗಳು ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳು ಎಂದು ರಾಷ್ಟ್ರ ಪ್ರಶಸ್ತಿ ಪಡೆದಿವೆ.
1972 ರಲ್ಲಿ ವಂಶ ವೃಕ್ಷದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣುವರ್ಧನ್ ಅವರು ಇಲ್ಲಿಯವರೆಗೆ ಕನ್ನಡದಲ್ಲಿ ಸುಮಾರು 194, ತಮಿಳಿನಲ್ಲಿ 5, ತೆಲುಗಿನಲ್ಲಿ 4, ಮಲಯಾಳಂನಲ್ಲಿ 2 ಮತ್ತು ಹಿಂದಿಯಲ್ಲಿ 4 ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡದ ಹಿರಿಯ ನಟರಲ್ಲಿ ಮೊದಲಿಗರು ಇವರ ನಂತರದ ಸ್ಥಾನ ರಮೇಶರದು.
ಕನ್ನಡಿಗರಿಂದ ಅಭಿನವ ಭಾರ್ಗವ ಎಂದು ಕರೆಸಿಕೊಂಡ ವಿಷ್ಣು ಅಭಿನಯದ ವಿಸ್ತಾರ ಕೂಡ ಅಷ್ಟೆ ಆಳ. ಭಾವನಾತ್ಮಕ ಮತ್ತು ಹೋರಾಟದ ದೃಶ್ಯಗಳು ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಉದಾರಣೆಗೆ ಬಂಧನದ ಡಾ. ಹರೀಶ ಮತ್ತು ಸುನಿಲ್ ಕುಮಾರ್ ದೇಸಾಯಿ ಅವರ ನಿಷ್ಕರ್ಷದಲ್ಲಿನ ಕಮಾಂಡೊ ಪಾತ್ರ ಮುತ್ತಿನ ಹಾರದ ಅಚ್ಚಪ್ಪನ ಪಾತ್ರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಅಭಿನಯದ ಸೋಗಡನ್ನು ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ನೀಡಿದ್ದಾರೆ ಗಿರೀಶ್‌ ಕಾರ್ನಾಡರ ವಂಶವೃಕ್ಷದೊಂದಿಗೆ ಚಿತ್ರರಂಗದ ಪ್ರವೇಶವಾಯಿತು ಆದರೂ ನಾಯಕನಾಗಿ ಬಡ್ತಿ ಹೊಂದಿದ್ದು ಪುಟ್ಟಣ್ಣ ಕಣಗಾಲ್‌ ನಿರ್ಧೇಶನದ ನಾಗರ ಹಾವು ಚಿತ್ರದ ರಾಮಾಚಾರಿಯ ಮೂಲಕ.ಇದೇ ಚಿತ್ರದಲ್ಲಿ ಅವರ ಕಾಲೇಜು ಸಹಪಾಟಿ ಅಪ್ತಮಿತ್ರ ಅಂಬರೀಷ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಜನನ ಮತ್ತು ಜೀವನ: ಸಪ್ಟಂಬರ್ 18, 1950ರಲ್ಲಿ ದಿವಂಗತ ಎಚ್ ಎಲ್ ನಾರಾಯಣರಾವ್ ಹಾಗೂ ದಿವಂಗತ ಕಾನಾಕ್ಷಮ್ಮ ಅವರ ಎರಡನೆ ಮಗನಾಗಿ ಮೈಸೂರಿನಲ್ಲಿ ಜನನ. ಪ್ರಾಥಮಿಕ ಶಿಕ್ಷಣ ಪಡೆದದ್ದು ಗೋಪಾಲ ಸ್ವಾಮಿ ಶಾಲೆಯಲ್ಲಿ, ಕಾಲೇಜು ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಯಿತು.
ಚಿತ್ರರಂಗಕ್ಕೆ ಕಾಲಿಟ್ಟ ಮೂರು ವರುಷಗಳ ನಂತರ ಫೆಬ್ರುವರಿ 27, 1975 ರಲ್ಲಿ ಕನ್ನಡದ ಚಿತ್ರ ನಟಿ ಭಾರತಿಯನ್ನು ವಿವಾಹವಾದರು.ಬ್ರಹ್ಮ ಕೆಲವೊಂದು ಬಾರಿ ವಿಚಿತ್ರ ಹಣೆ ಬರಹ ಬರೆದಿರುತ್ತಾನೆ ಇನ್ನೇನು ಜೀವನ ಉತ್ತುಂಗದತ್ತ ಸಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಮಗ್ಗಲು ಮುಳ್ಳೊಂದನ್ನು ಹುಟ್ಟಿಕೊಂಡುಬಿಟ್ಟಿರುತ್ತದೆ.
ವಿಷ್ಣು ಜೀವನದಲ್ಲಿಯೂ ಇದೇ ಆಗಿದ್ದು, ಗಂಧದ ಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಅವಗಢ ಮೇಲಾಗಿ ಮಾಧ್ಯಮದ ತಪ್ಪು ಅಭಿಪ್ರಾಯದ ಪ್ರಚಾರ ವಿಷ್ಣುವಿನ ಇಡಿ ಜೀವನವನ್ನು ಹೋರಾಟದ ಹಾದಿಗೆ ತಂದು ನಿಲ್ಲಿಸಿದ್ದು ಇತಿಹಾಸ, ಮತ್ತು ಆ ಯುದ್ದದಲ್ಲಿ ಅವರು ಗೆದ್ದದ್ದು ಅತಿ ದೊಡ್ಡ ಇತಿಹಾಸ.

No comments: