Udayvani
Monday, February 25, 2008
Wednesday, February 6, 2008
ಬೆಳದಿಂಗಳಾಗಿ ಬಾ:ಒಂದಿಷ್ಟು ಅಚ್ಚರಿ, ಒಂದಿಷ್ಟು ನಿರಾಶೆ

(ಕರ್ಟೆಸೀ: ವನ್ ಇಂಡಿಯಾ)
ಹೆಸರು ಕೇಳಿದರೆ ಎಷ್ಟುಚೆಂದ ಇದೆ ಅಂತ ಅನಿಸುತ್ತದೆ. ಇದೊಂದು ಪ್ರೇಮ ಕತೆ ಎನ್ನುವ ನಿರೀಕ್ಷೆ ಮೂಡಿಸುತ್ತದೆ.ಎಂ.ಎಸ್ .ರಮೇಶ್ ಮೊದಲ ಬಾರಿ ಕವಿತೆಯಂಥ ಹೆಸರು ಇಟ್ಟಿದ್ದರಿಂದ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಗುತ್ತದೆ. ಖಡಕ್ ಸಂಭಾಷಣೆಯಿಂದ ಕಿಕ್ ಕೊಡುವ ಇವರಿಂದ ಇನ್ನೋ ಏನೋ ಹೊಸದನ್ನು ನೋಡಬಹುದೆಂಬ ಆಸೆ ಮೂಡುತ್ತದೆ. ಆದರೆ ನೋಡ್ತಾ ನೋಡ್ತಾ ರಮೇಶ್ ಹೀಗೇಕೆ ಮಾಡಿದರೆಂದು ಅಚ್ಚರಿಯಾಗುತ್ತದೆ. ಜತೆಗಿಷ್ಟು ನಿರಾಸೆ.
ದೇವಶೆಟ್ಟಿ ಮಹೇಶ್
ದೇವಶೆಟ್ಟಿ ಮಹೇಶ್
ಇದು ನಿಜ. ರಮೇಶ್ ನಿರ್ದೇಶಕರಾಗಿ ಮತ್ತು ಸಂಭಾಷಣಾಕಾರರಾಗಿ ಸೋತಿದ್ದಾರೆ. ತುಂಬಾ ಮಾಮೂಲಿ ಕತೆಗೆ ಅಷ್ಟೇ ನೀರಸ ನಿರೂಪಣೆ ಮಾಡಿದ್ದಾರೆ ವಿರಾಮಕ್ಕೆ ಸಿಗುವ ತಿರುವು ಬಿಟ್ಟರೆ ಕತೆ ಎಲ್ಲೂ ಕುತೂಹಲ ಮೂಡಿಸುವುದಿಲ್ಲ. ಕೊನೆಗೆ ಹೀಗೆ ಆಗುತ್ತದೆ ಎಂದು ಗೊತ್ತಾಗುವಂತಿದ್ದರೆ ಅದನ್ನು ಯಾಕೆ ನೋಡಬೇಕೆಂದು ಜನ ಕೇಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ದೃಶ್ಯಗಳ ಜಾಳುತನ ಬೋರ್ ಹೊಡೆಸುತ್ತವೆ. ಇದು ಪ್ರೇಮ ಕತೆಯೂ ಅಲ್ಲ. ರೌಡಿಸಂ ಕತೆಯೂ ಅಲ್ಲ. ಎರಡನ್ನೂ ಮಿಕ್ಸ್ ಮಾಡಲು ಹೋಗಿ ಎರಡಕ್ಕೂ ರಮೇಶ್ ನ್ಯಾಯ ಸಲ್ಲಿಸಿಲ್ಲ.ಇನ್ನುಳಿದ ವಿವರ ಕೇಳುವ ಮುನ್ನ ಕತೆಯನ್ನು ಕೊಂಚ ಕೇಳಿ.
ನಾಯಕ ಅಜ್ಜ ಅಜ್ಜಿ ಜತೆ ಬೆಳೆದಿರುತ್ತಾನೆ. ಗೆಳೆಯನ ಮದುವೆಯಲ್ಲಿ ನಾಯಕಿ ಸಿಗುತ್ತಾಳೆ. ಆಕೆಯನ್ನು ಪ್ರೀತಿಸುತ್ತಾನೆ. ಆಕೆ ಪೊಲೀಸ್ ಅಧಿಕಾರಿ ಮಗಳು. ಇದೇ ಹೊತ್ತಿನಲ್ಲಿ ನಾಯಕ ಒಬ್ಬ ರೌಡಿಯನ್ನು ಹೊಡೆಯುತ್ತಾನೆ. ಆತ ದೊಡ್ಡ ಸ್ಮಗ್ಲರ್ ನಬಂಟ. ನನ್ನ ಹುಡುಗನನ್ನು ಹೊಡೆದ ಎಂಬ ಕಾರಣಕ್ಕೆ ಆತ ನಾಯಕನ ಬೆನ್ನು ಬೀಳುತ್ತಾನೆ. ಆಗ ಆ ನಾಯಕ ತನ್ನ ಪ್ರತಿಸ್ಪರ್ಧಿ ಗ್ಯಾಂಗ್ ರೌಡಿಯ ಮಗ ಎಂದು ಗೊತ್ತಾಗುತ್ತದೆ. ಈತ ರೌಡಿ ಮಗ ಎನ್ನುವ ಕಾರಣಕ್ಕೆ ಪೊಲೀಸ್ ಅಧಿಕಾರಿ ಕೂಡ ತನ್ನ ಮಗಳನ್ನು ಈತನಿಗೆ ಕೊಡಲು ಒಪ್ಪುವುದಿಲ್ಲ. ಆ ಪ್ರೀತಿಯನ್ನು ಮರಳಿ ಗಳಿಸಲು ನಾಯಕ ಏನೇನು ಮಾಡುತ್ತ್ತಾನೆ ಎನ್ನ್ನುವುದೇ ಉಳಿದ ಕತೆ.
ತುಂಬಾ ದೊಡ್ಡ ಕ್ಯಾನ್ವಾಸ್ ನ ಚಿತ್ರಕತೆಯನ್ನು ರಮೇಶ್ ಹೆಣೆದಿದ್ದಾರೆ. ಆರಂಭದ ಮಾದುವೆ ಮನೆಯ ತಮಾಷೆ ಖುಷಿಕೊಡುತ್ತವೆ. ವಿರಾಮದ ನಂತರ ರಂಗಾಯಣ ರಘು ಎಲ್ಲರನ್ನೂ ಹಿಂದಿಕ್ಕಿ ಕಿಕ್ ಕೊಡುತ್ತಾರೆ. ವಿಜಯ ರಾಘವೇಂದ್ರ ಎಂದಿನಂತೆ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ರಮಣೀತು ಚೌಧರಿ ಮುದ್ದಾಗಿ ಕಾಣುತ್ತಾಳೆ. ಜತೆಗೆ ಅಭಿನಯದ ಬಗ್ಗೆ ಆಸಕ್ತಿವಹಿಸುವುದು ಒಳ್ಳೆಯದು. ಚಂದ್ರಶೇಖರಕಂಬಾರರು ಸಂಕೋಚದಿಂದ ಕ್ಯಾಮರಾ ಮುಂದೆ ನಿಂತಿರುವುದು ಪ್ರತಿ ಶಾಟ್ ನಲ್ಲಿ ಕಾಣುತ್ತದೆ. ಇಲ್ಲ , ಅವರನ್ನು ನಟನಾಗಿ ಒಪ್ಪಿಕೊಳ್ಳುವುದು ಕಷ್ಟ .ಆದರೆ ಅವರಾಡುವ ಮಾತುಗಳು ಇಷ್ಟ ಇಷ್ಟ. ಶೋಭರಾಜ್, ಸಂಕೇತ್ ಕಾಶಿ, ಅವಿನಾಶ್ ಮೋಸ ಮಾಡಿಲ್ಲ. ಕಾಶಿ ಪತ್ನಿಯಾಗಿ ನಟಿಸಿದ ನಟಿ ನೆನಪಿನಲ್ಲಿ ಉಳಿಯುತ್ತಾಳೆ. ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.ವಿರಹ ಗೀತೆ ಮನಸು ತಟ್ಟುತ್ತದೆ.
ಇದೊಂದು ಸ್ವಮೇಕ್ ಕತೆ ಎನ್ನುವುದು ಮೆಚ್ಚಬೇಕಾದ ಅಂಶ. ಆದರೆ ಅಷ್ಟಕ್ಕೇ ಇದನ್ನು ಮೆಚ್ಚಬೇಕು ಅಂದರೆ ಸೋ ಸಾರಿ.ನಾಯಕ ನಾಯಕಿ ನಡುವೆ ಪ್ರೇಮ ಆರಂಭವಾಗುವ ದೃಶ್ಯಗಳನ್ನು ತೋರಿಸದೆ ಅವರು ಪ್ರಾಣ ಕೊಡುವಷ್ಟು ಪ್ರೀತಿಸುತ್ತಾರೆ ಎಂದು ಹೇಳುವುದು ಬಾಲಿಶ. ರಘು ತಂಗಿಯ ಪ್ರೇಮ ಪ್ರಕರಣಕ್ಕೆ ಸುಖ್ಯಾಂತ ಕಾಣಿಸಲು ನಾಯಕ ಹೆಣಗಾಡುವುದರಲ್ಲಿ ಎಲ್ಲೋ ದಿಕ್ಕು ತಪ್ಪಿದಂತಾಗುತ್ತದೆ. ಅಲ್ಲಲ್ಲಿ ಮಾತುಗಳು ಖುಷಿ ಕೊಡುತ್ತವೆ. ಆದರೆ ಎಲ್ಲಾ ನೋಡಿದ ಮೇಲೆ ಅಥವಾ ನೋಡುವಾಗಲೇ ಆಕಳಿಕೆ ತರಿಸುತ್ತಾ, ಕೆಲವೊಮ್ಮೆ ನಗು ಮೂಡಿಸುತ್ತಾ ಸಾಗುತ್ತವೆ.ನಮ್ಮಲ್ಲಿ ಕತೆಗಳು ಇರುವುದು ಇಷ್ಟೇನಾ? ದೃಶ್ಯಗಳ ತಾಜಾತನಕ್ಕೆ ಯಾಕೆ ಕೆಲವರು ಹೊಸದಾಗಿ ಪ್ರಯತ್ನಿಸುತ್ತಲೇ ಇಲ್ಲ? ಎಲ್ಲರೂ ಹೊರಟ ದಾರಿಯನ್ನು ಬಿಟ್ಟು ಕೊಂಚ ಬೇರೆ ಕಡೆ ಕಣ್ಣು ಹಾಯಿಸಿದರೆ ಬೇರೆ ಏನಾದರೂ ಹೊಸದು ಸಿಗಬಹುದುದಲ್ಲವೆ? ರಮೇಶ್ ಗೆ ಸಾಧ್ಯವಿದೆ ಮತ್ತು ಇದೆಲ್ಲಾ ಗೊತ್ತೂ ಇದೆ. ಆದರೂ ಹೀಗೆ ಮಾಡಿದ್ದಾರೆ. ಮುಂದಿನ ಸಾರಿ ಏನು ಮಾಡ್ತಾರೋ ನೋಡೋಣ.
ನಾಯಕ ಅಜ್ಜ ಅಜ್ಜಿ ಜತೆ ಬೆಳೆದಿರುತ್ತಾನೆ. ಗೆಳೆಯನ ಮದುವೆಯಲ್ಲಿ ನಾಯಕಿ ಸಿಗುತ್ತಾಳೆ. ಆಕೆಯನ್ನು ಪ್ರೀತಿಸುತ್ತಾನೆ. ಆಕೆ ಪೊಲೀಸ್ ಅಧಿಕಾರಿ ಮಗಳು. ಇದೇ ಹೊತ್ತಿನಲ್ಲಿ ನಾಯಕ ಒಬ್ಬ ರೌಡಿಯನ್ನು ಹೊಡೆಯುತ್ತಾನೆ. ಆತ ದೊಡ್ಡ ಸ್ಮಗ್ಲರ್ ನಬಂಟ. ನನ್ನ ಹುಡುಗನನ್ನು ಹೊಡೆದ ಎಂಬ ಕಾರಣಕ್ಕೆ ಆತ ನಾಯಕನ ಬೆನ್ನು ಬೀಳುತ್ತಾನೆ. ಆಗ ಆ ನಾಯಕ ತನ್ನ ಪ್ರತಿಸ್ಪರ್ಧಿ ಗ್ಯಾಂಗ್ ರೌಡಿಯ ಮಗ ಎಂದು ಗೊತ್ತಾಗುತ್ತದೆ. ಈತ ರೌಡಿ ಮಗ ಎನ್ನುವ ಕಾರಣಕ್ಕೆ ಪೊಲೀಸ್ ಅಧಿಕಾರಿ ಕೂಡ ತನ್ನ ಮಗಳನ್ನು ಈತನಿಗೆ ಕೊಡಲು ಒಪ್ಪುವುದಿಲ್ಲ. ಆ ಪ್ರೀತಿಯನ್ನು ಮರಳಿ ಗಳಿಸಲು ನಾಯಕ ಏನೇನು ಮಾಡುತ್ತ್ತಾನೆ ಎನ್ನ್ನುವುದೇ ಉಳಿದ ಕತೆ.
ತುಂಬಾ ದೊಡ್ಡ ಕ್ಯಾನ್ವಾಸ್ ನ ಚಿತ್ರಕತೆಯನ್ನು ರಮೇಶ್ ಹೆಣೆದಿದ್ದಾರೆ. ಆರಂಭದ ಮಾದುವೆ ಮನೆಯ ತಮಾಷೆ ಖುಷಿಕೊಡುತ್ತವೆ. ವಿರಾಮದ ನಂತರ ರಂಗಾಯಣ ರಘು ಎಲ್ಲರನ್ನೂ ಹಿಂದಿಕ್ಕಿ ಕಿಕ್ ಕೊಡುತ್ತಾರೆ. ವಿಜಯ ರಾಘವೇಂದ್ರ ಎಂದಿನಂತೆ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ರಮಣೀತು ಚೌಧರಿ ಮುದ್ದಾಗಿ ಕಾಣುತ್ತಾಳೆ. ಜತೆಗೆ ಅಭಿನಯದ ಬಗ್ಗೆ ಆಸಕ್ತಿವಹಿಸುವುದು ಒಳ್ಳೆಯದು. ಚಂದ್ರಶೇಖರಕಂಬಾರರು ಸಂಕೋಚದಿಂದ ಕ್ಯಾಮರಾ ಮುಂದೆ ನಿಂತಿರುವುದು ಪ್ರತಿ ಶಾಟ್ ನಲ್ಲಿ ಕಾಣುತ್ತದೆ. ಇಲ್ಲ , ಅವರನ್ನು ನಟನಾಗಿ ಒಪ್ಪಿಕೊಳ್ಳುವುದು ಕಷ್ಟ .ಆದರೆ ಅವರಾಡುವ ಮಾತುಗಳು ಇಷ್ಟ ಇಷ್ಟ. ಶೋಭರಾಜ್, ಸಂಕೇತ್ ಕಾಶಿ, ಅವಿನಾಶ್ ಮೋಸ ಮಾಡಿಲ್ಲ. ಕಾಶಿ ಪತ್ನಿಯಾಗಿ ನಟಿಸಿದ ನಟಿ ನೆನಪಿನಲ್ಲಿ ಉಳಿಯುತ್ತಾಳೆ. ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.ವಿರಹ ಗೀತೆ ಮನಸು ತಟ್ಟುತ್ತದೆ.
ಇದೊಂದು ಸ್ವಮೇಕ್ ಕತೆ ಎನ್ನುವುದು ಮೆಚ್ಚಬೇಕಾದ ಅಂಶ. ಆದರೆ ಅಷ್ಟಕ್ಕೇ ಇದನ್ನು ಮೆಚ್ಚಬೇಕು ಅಂದರೆ ಸೋ ಸಾರಿ.ನಾಯಕ ನಾಯಕಿ ನಡುವೆ ಪ್ರೇಮ ಆರಂಭವಾಗುವ ದೃಶ್ಯಗಳನ್ನು ತೋರಿಸದೆ ಅವರು ಪ್ರಾಣ ಕೊಡುವಷ್ಟು ಪ್ರೀತಿಸುತ್ತಾರೆ ಎಂದು ಹೇಳುವುದು ಬಾಲಿಶ. ರಘು ತಂಗಿಯ ಪ್ರೇಮ ಪ್ರಕರಣಕ್ಕೆ ಸುಖ್ಯಾಂತ ಕಾಣಿಸಲು ನಾಯಕ ಹೆಣಗಾಡುವುದರಲ್ಲಿ ಎಲ್ಲೋ ದಿಕ್ಕು ತಪ್ಪಿದಂತಾಗುತ್ತದೆ. ಅಲ್ಲಲ್ಲಿ ಮಾತುಗಳು ಖುಷಿ ಕೊಡುತ್ತವೆ. ಆದರೆ ಎಲ್ಲಾ ನೋಡಿದ ಮೇಲೆ ಅಥವಾ ನೋಡುವಾಗಲೇ ಆಕಳಿಕೆ ತರಿಸುತ್ತಾ, ಕೆಲವೊಮ್ಮೆ ನಗು ಮೂಡಿಸುತ್ತಾ ಸಾಗುತ್ತವೆ.ನಮ್ಮಲ್ಲಿ ಕತೆಗಳು ಇರುವುದು ಇಷ್ಟೇನಾ? ದೃಶ್ಯಗಳ ತಾಜಾತನಕ್ಕೆ ಯಾಕೆ ಕೆಲವರು ಹೊಸದಾಗಿ ಪ್ರಯತ್ನಿಸುತ್ತಲೇ ಇಲ್ಲ? ಎಲ್ಲರೂ ಹೊರಟ ದಾರಿಯನ್ನು ಬಿಟ್ಟು ಕೊಂಚ ಬೇರೆ ಕಡೆ ಕಣ್ಣು ಹಾಯಿಸಿದರೆ ಬೇರೆ ಏನಾದರೂ ಹೊಸದು ಸಿಗಬಹುದುದಲ್ಲವೆ? ರಮೇಶ್ ಗೆ ಸಾಧ್ಯವಿದೆ ಮತ್ತು ಇದೆಲ್ಲಾ ಗೊತ್ತೂ ಇದೆ. ಆದರೂ ಹೀಗೆ ಮಾಡಿದ್ದಾರೆ. ಮುಂದಿನ ಸಾರಿ ಏನು ಮಾಡ್ತಾರೋ ನೋಡೋಣ.
Tuesday, February 5, 2008
Monday, February 4, 2008
ಮದುವೆ ನಂತರ ಎಲ್ಲಾ ನಟಿಯರ ಗತಿ ಅಷ್ಟೇ

(ಕರ್ಟೆಸೀ:ವೆಬ್ ದುನಿಯಾ)
ಒಂದು ಸಾರಿ ಕುತ್ತಿಗೆಗೆ ತಾಳಿ ಬಿದ್ದುಬಿಟ್ಟರೆ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳಿಗೆ ನೇಣು ಬಿತ್ತಿತೆಂದೇ ಲೆಕ್ಕ. ಮದುವೆಯಾದ ಮೇಲೂ ತನ್ನಲ್ಲಿ ಆಕರ್ಷಣೆ ಉಳಿದಿದೆಯೆಂದು ಮೈಕ್ ಹಿಡಿದು ಕೂಗಿಕೊಂಡರೂ ನಿರ್ಮಾಪಕರು ಕ್ಯಾರೆ ಅನ್ನುವುದಿಲ್ಲ. ನಟಿಸಲೇಬೇಕೆಂಬ ಅಭಿಲಾಷೆಯಿದ್ದವರು ಅನಿವಾರ್ಯವಾಗಿ ಅಕ್ಕ, ತಂಗಿ, ಸ್ನೇಹಿತೆ, ಅಗತ್ಯ ಬಿದ್ದರೆ ಅಮ್ಮನ ಪಾತ್ರಕ್ಕೂ ಸೈ ಎನ್ನಬೇಕು. ಲಗ್ನವಾದನಂತರ ಪೋಷಕ ಪಾತ್ರಗಳಿಗೆ ತಥಾಸ್ತು ಎಂದವರ ಪಟ್ಟಿ ದೊಡ್ಡದೇ ಇದೆ. ಸುಧಾರಾಣಿ, ಅನು ಕೃಷ್ಣಕುಮಾರ್, ಶ್ರುತಿ, ರಕ್ಷಿತಾ... ಹುಡುಕಿಕೊಂಡು ಹೊಂಟರೆ ಇನ್ನೂ ನಾಲ್ಕಾರು ನಟಿಯರು ಸಿಕ್ಕೇ ಸಿಗುತ್ತಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಓಂ ಚಿತ್ರದ ಮೂಲಕ ಅಂಬೆಗಾಲಿಟ್ಟು ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಬೆಳೆದ ನಟಿ ಪ್ರೇಮಾ. ಜೀವನ್ರ ಜೀವನ ಸಂಗಾತಿಯಾದ ನಂತರ ಪ್ರೇಮಾ ಮತ್ತೆ ಮುಖಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಇದು ಕನ್ನಡ ಚಿತ್ರದಲ್ಲಲ್ಲ. ತೆಲುಗು ಚಿತ್ರದಲ್ಲಿ. ತೆಲುಗು ಚಿತ್ರ ಕೃಷ್ಣಾರ್ಜನದಲ್ಲಿ ಪ್ರೇಮಾ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹಾಗೆ ನೋಡಿದರೆ ಇಂದು (ಫೆ.1) ಬಿಡುಗಡೆಯಾಗಿರುವ ನವಶಕ್ತಿ ಮಹಾತ್ಮೆ ಚಿತ್ರದಲ್ಲೂ ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಈ ಚಿತ್ರ ಸೆಟ್ಟೇರಿದ್ದು ಅವರ ಮದುವೆಯ ಮೊದಲು, ಬಿಡುಗಡೆಯಾಗಿದ್ದು ಮದುವೆಯಾಗಿ ವರುಷಗಳ ನಂತರ. ಕನ್ನಡ ಚಿತ್ರದಲ್ಲಿಯೂ ಪ್ರಯತ್ನ ಮಾಡಿದರೆ ಅಕ್ಕ, ಅತ್ತಿಗೆ, ನಾದಿನಿ, ಅಮ್ಮನ ಪಾತ್ರಗಳು ಸಿಗುವುದು ಕಷ್ಟವೇನೂ ಅಲ್ಲ. ಆದರೇಕೋ ಪ್ರೇಮಾ ತೆಲುಗು ಚಿತ್ರದತ್ತ ಒಲವು ತೋರಿಸಿದ್ದಾರೆ.
ಮದುವೆಯಾದ ನಂತರ ಸಿನೆಮಾಗಳಲ್ಲಿ ಕ್ಲಿಕ್ಕಾದ ಉದಾಹರಣೆಗಳೂ ಸಾಕಷ್ಟಿವೆ. ಮೋಹಕ ತಾರೆ ಲಕ್ಷ್ಮಿ ನಟನೆಯಲ್ಲಿ ಉತ್ತುಂಗ ತಲುಪಿದ್ದು ಮದುವೆಯಾದ ನಂತರವೇ. ಅಪರೂಪದ ಸತ್ವಯುತ ಪಾತ್ರಗಳು, ಅತ್ಯುತ್ತಮ ಕಥೆ, ಜೀವತುಂಬುವ ಹಾಡುಗಳು ಲಕ್ಷ್ಮಿ ಉಚ್ಛ್ರಾಯ ಸ್ಥಿತಿ ತಲುಪಲು ಸಹಾಯ ಮಾಡಿದ್ದವು. ಈಗ ಮಹಿಳಾ ಪ್ರಧಾನ ಚಿತ್ರಗಳು ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಬಹುದಿನಗಳ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ಅಳುಮುಂಜಿ ತಾರೆ ಶ್ರುತಿಗೆ ಕವಿತಾ ಲಂಕೇಶ್ ನಿರ್ದೇಶನದ 'ಅವ್ವ' ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತಿದೆ. ಸುಧಾರಾಣಿ, ಅನು ಕೃಷ್ಣಕುಮಾರ್ ಮೊದಲಾದವರು ಈಗಾಗಲೇ ತೆರೆಯ ಮರೆಗೆ ಸೇರಿದ್ದಾರೆ.
ತೆಲುಗಿನತ್ತ ಮುಖ ಮಾಡಿರುವ ಪ್ರೇಮಾ ಕನ್ನಡದತ್ತಲೂ ಗಮನ ಹರಿಸಲಿ. ಪಾತ್ರ ಮುಖ್ಯವಲ್ಲ ಅದರಲ್ಲಿರುವ ಸತ್ವ ಮುಖ್ಯ, ಬದಲಾದ ಸನ್ನಿವೇಶಗಳಿಗೆ ತಾವೂ ಬದಲಾಗಬೇಕೆಂಬ ಸತ್ಯವನ್ನು ಪ್ರೇಮಾ ಅರಿತುಕೊಳ್ಳಲಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ. ಅಭಿನಯದ ತಾಕತ್ತಿದ್ದರೆ ಎಂಥ ಪಾತ್ರಗಳಲ್ಲಿಯೂ ಮಿನುಗಬಹುದು ಎಂಬುದಕ್ಕೆ ತಾರಾನೇ ಉಳಿದ ನಟಿಯರಿಗೆ ಉದಾಹರಣೆಯಾಗಲಿ.
ಈ ಪಟ್ಟಿಗೆ ಹೊಸ ಸೇರ್ಪಡೆ ಓಂ ಚಿತ್ರದ ಮೂಲಕ ಅಂಬೆಗಾಲಿಟ್ಟು ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಬೆಳೆದ ನಟಿ ಪ್ರೇಮಾ. ಜೀವನ್ರ ಜೀವನ ಸಂಗಾತಿಯಾದ ನಂತರ ಪ್ರೇಮಾ ಮತ್ತೆ ಮುಖಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಇದು ಕನ್ನಡ ಚಿತ್ರದಲ್ಲಲ್ಲ. ತೆಲುಗು ಚಿತ್ರದಲ್ಲಿ. ತೆಲುಗು ಚಿತ್ರ ಕೃಷ್ಣಾರ್ಜನದಲ್ಲಿ ಪ್ರೇಮಾ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹಾಗೆ ನೋಡಿದರೆ ಇಂದು (ಫೆ.1) ಬಿಡುಗಡೆಯಾಗಿರುವ ನವಶಕ್ತಿ ಮಹಾತ್ಮೆ ಚಿತ್ರದಲ್ಲೂ ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಈ ಚಿತ್ರ ಸೆಟ್ಟೇರಿದ್ದು ಅವರ ಮದುವೆಯ ಮೊದಲು, ಬಿಡುಗಡೆಯಾಗಿದ್ದು ಮದುವೆಯಾಗಿ ವರುಷಗಳ ನಂತರ. ಕನ್ನಡ ಚಿತ್ರದಲ್ಲಿಯೂ ಪ್ರಯತ್ನ ಮಾಡಿದರೆ ಅಕ್ಕ, ಅತ್ತಿಗೆ, ನಾದಿನಿ, ಅಮ್ಮನ ಪಾತ್ರಗಳು ಸಿಗುವುದು ಕಷ್ಟವೇನೂ ಅಲ್ಲ. ಆದರೇಕೋ ಪ್ರೇಮಾ ತೆಲುಗು ಚಿತ್ರದತ್ತ ಒಲವು ತೋರಿಸಿದ್ದಾರೆ.
ಮದುವೆಯಾದ ನಂತರ ಸಿನೆಮಾಗಳಲ್ಲಿ ಕ್ಲಿಕ್ಕಾದ ಉದಾಹರಣೆಗಳೂ ಸಾಕಷ್ಟಿವೆ. ಮೋಹಕ ತಾರೆ ಲಕ್ಷ್ಮಿ ನಟನೆಯಲ್ಲಿ ಉತ್ತುಂಗ ತಲುಪಿದ್ದು ಮದುವೆಯಾದ ನಂತರವೇ. ಅಪರೂಪದ ಸತ್ವಯುತ ಪಾತ್ರಗಳು, ಅತ್ಯುತ್ತಮ ಕಥೆ, ಜೀವತುಂಬುವ ಹಾಡುಗಳು ಲಕ್ಷ್ಮಿ ಉಚ್ಛ್ರಾಯ ಸ್ಥಿತಿ ತಲುಪಲು ಸಹಾಯ ಮಾಡಿದ್ದವು. ಈಗ ಮಹಿಳಾ ಪ್ರಧಾನ ಚಿತ್ರಗಳು ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಬಹುದಿನಗಳ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ಅಳುಮುಂಜಿ ತಾರೆ ಶ್ರುತಿಗೆ ಕವಿತಾ ಲಂಕೇಶ್ ನಿರ್ದೇಶನದ 'ಅವ್ವ' ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತಿದೆ. ಸುಧಾರಾಣಿ, ಅನು ಕೃಷ್ಣಕುಮಾರ್ ಮೊದಲಾದವರು ಈಗಾಗಲೇ ತೆರೆಯ ಮರೆಗೆ ಸೇರಿದ್ದಾರೆ.
ತೆಲುಗಿನತ್ತ ಮುಖ ಮಾಡಿರುವ ಪ್ರೇಮಾ ಕನ್ನಡದತ್ತಲೂ ಗಮನ ಹರಿಸಲಿ. ಪಾತ್ರ ಮುಖ್ಯವಲ್ಲ ಅದರಲ್ಲಿರುವ ಸತ್ವ ಮುಖ್ಯ, ಬದಲಾದ ಸನ್ನಿವೇಶಗಳಿಗೆ ತಾವೂ ಬದಲಾಗಬೇಕೆಂಬ ಸತ್ಯವನ್ನು ಪ್ರೇಮಾ ಅರಿತುಕೊಳ್ಳಲಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ. ಅಭಿನಯದ ತಾಕತ್ತಿದ್ದರೆ ಎಂಥ ಪಾತ್ರಗಳಲ್ಲಿಯೂ ಮಿನುಗಬಹುದು ಎಂಬುದಕ್ಕೆ ತಾರಾನೇ ಉಳಿದ ನಟಿಯರಿಗೆ ಉದಾಹರಣೆಯಾಗಲಿ.
Saturday, February 2, 2008
ಬಿಪಾಶಾ, ಸಮೀರಾ, ಕತ್ರಿನಾರಿಂದ ಸೆಸಿಯೆಸ್ಟ್ "ರನ್"

(ಕರ್ಟೆಸೀ: ವೆಬ್ ದುನಿಯಾ)
ಅಬ್ಬಾಸ್-ಮಸ್ತಾನ್ ಅವರ ಮುಂದಿನ ಚಿತ್ರ 'ರೇಸ್'ನಲ್ಲಿ ಒಬ್ಬರಲ್ಲ, ಮೂವರು 'ಹಾಟ್' ನಾಯಕಿಯರು ತಮ್ಮ ತಮ್ಮ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ! ಬಿಪಾಶಾ ಬಸು, ಸಮೀರಾ ರೆಡ್ಡಿ ಮತ್ತು ಕತ್ರಿನಾ ಕೈಫ್ ಅವರನ್ನು ಒಂದೇ ಚಿತ್ರದಲ್ಲಿ ನೋಡುವ ಅವಕಾಶ ದೊರೆತಿರುವುದು ಚಿತ್ರ ರಸಿಕರ ನಿರೀಕ್ಷೆ ಹೆಚ್ಚಿಸಿದೆ.
ಒಂದೇ ಚಿತ್ರದಲ್ಲಿ ಮೂವರೂ ನಟಿಸುತ್ತಿದ್ದರೂ ಈ ನಟೀಮಣಿಯರಿಗೆ ಪರಸ್ಪರ ಮಾತಿಲ್ಲ-ಕಥೆಯಿಲ್ಲವಂತೆ. ಆದರೆ ಮೂವರು ನಾಯಕರಾದ ಅನಿಲ್ ಕಪೂರ್, ಅಕ್ಷಯ್ ಕುಮಾರ್ ಮತ್ತು ಸೈಫ್ ಆಲಿ ಖಾನ್ ಅವರು ಪರಸ್ಪರ ಜೋಕ್ ಮಾಡುತ್ತಾ, ನಗು ನಗುತ್ತಾ ಬೆರೆಯುತ್ತಿದ್ದರೆ, ನಾಯಕಿಯರಂತೂ ಮೌನ ಮೌನ ಮೌನ...
ತಾನು ಮತ್ತು ಕತ್ರಿನಾ ಪರಸ್ಪರ ಮಾತುಕತೆ ನಡೆಸುತ್ತಿಲ್ಲ ಎಂಬುದನ್ನು ಬಿಪಾಶಾ ಒಪ್ಪುತ್ತಾರೆ. ಜಾನ್ ಅಬ್ರಹಾಂ ಮತ್ತು ಸಲ್ಮಾನ್ ಖಾನ್ ಕೂಡ ಪರಸ್ಪರರನ್ನು ಇಷ್ಟಪಡುವುದಿಲ್ಲ, ಬಹುಶಃ ಇದಕ್ಕಾಗಿಯೇ ಬಿಪಾಶಾ ಮತ್ತು ಕತ್ರಿನಾ ಕೂಡ ಪರಸ್ಪರ ಮಾತನಾಡಲು ಇಷ್ಟಪಡುತ್ತಿಲ್ಲ ಎಂಬ ಗುಸುಗುಸು ಬಾಲಿವುಡ್ ಲೋಕದಲ್ಲಿದೆ.
ನಾಯಕಿಯರ ಈ ಮೌನ ವ್ರತವು ಅಬ್ಬಾಸ್-ಮಸ್ತಾನ್ ಅವರಿಗೆ ಶೂಟಿಂಗ್ ನಡೆಸುವಾಗ ತುಂಬಾನೇ ಸಮಸ್ಯೆ ತಂದೊಡ್ಡಿದೆ ಅಂತ ಮೂಲಗಳು ತಿಳಿಸಿವೆ. ಈ ಚಿತ್ರವು ಮಾರ್ಚ್ 21ರಂದು ತೆರೆ ಕಾಣಲಿದೆ.
ಒಂದೇ ಚಿತ್ರದಲ್ಲಿ ಮೂವರೂ ನಟಿಸುತ್ತಿದ್ದರೂ ಈ ನಟೀಮಣಿಯರಿಗೆ ಪರಸ್ಪರ ಮಾತಿಲ್ಲ-ಕಥೆಯಿಲ್ಲವಂತೆ. ಆದರೆ ಮೂವರು ನಾಯಕರಾದ ಅನಿಲ್ ಕಪೂರ್, ಅಕ್ಷಯ್ ಕುಮಾರ್ ಮತ್ತು ಸೈಫ್ ಆಲಿ ಖಾನ್ ಅವರು ಪರಸ್ಪರ ಜೋಕ್ ಮಾಡುತ್ತಾ, ನಗು ನಗುತ್ತಾ ಬೆರೆಯುತ್ತಿದ್ದರೆ, ನಾಯಕಿಯರಂತೂ ಮೌನ ಮೌನ ಮೌನ...
ತಾನು ಮತ್ತು ಕತ್ರಿನಾ ಪರಸ್ಪರ ಮಾತುಕತೆ ನಡೆಸುತ್ತಿಲ್ಲ ಎಂಬುದನ್ನು ಬಿಪಾಶಾ ಒಪ್ಪುತ್ತಾರೆ. ಜಾನ್ ಅಬ್ರಹಾಂ ಮತ್ತು ಸಲ್ಮಾನ್ ಖಾನ್ ಕೂಡ ಪರಸ್ಪರರನ್ನು ಇಷ್ಟಪಡುವುದಿಲ್ಲ, ಬಹುಶಃ ಇದಕ್ಕಾಗಿಯೇ ಬಿಪಾಶಾ ಮತ್ತು ಕತ್ರಿನಾ ಕೂಡ ಪರಸ್ಪರ ಮಾತನಾಡಲು ಇಷ್ಟಪಡುತ್ತಿಲ್ಲ ಎಂಬ ಗುಸುಗುಸು ಬಾಲಿವುಡ್ ಲೋಕದಲ್ಲಿದೆ.
ನಾಯಕಿಯರ ಈ ಮೌನ ವ್ರತವು ಅಬ್ಬಾಸ್-ಮಸ್ತಾನ್ ಅವರಿಗೆ ಶೂಟಿಂಗ್ ನಡೆಸುವಾಗ ತುಂಬಾನೇ ಸಮಸ್ಯೆ ತಂದೊಡ್ಡಿದೆ ಅಂತ ಮೂಲಗಳು ತಿಳಿಸಿವೆ. ಈ ಚಿತ್ರವು ಮಾರ್ಚ್ 21ರಂದು ತೆರೆ ಕಾಣಲಿದೆ.
Subscribe to:
Posts (Atom)