ವಿಶೇಷ ಅಂಕಣಗಳನ್ನು ಬರೆದು ಓದುಗರಿಗೆ ಅಚ್ಚುಮೆಚ್ಚಾಗಿದ್ದ ಪತ್ರಕರ್ತೆ ಸುಮನ ಕಿತ್ತೂರ ನಿರ್ದೇಶನದ ಪ್ರಥಮ ಚಿತ್ರ 'ಸ್ಲಂಬಾಲ'। ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣವಾಗಿದ್ದು ಆಕಾಶ್ ಸ್ಟೂಡಿಯೊದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಈ ಹಿಂದೆ 'ಆ ದಿನಗಳು' ಚಿತ್ರವನ್ನು ನಿರ್ಮಿಸಿದ್ದ, ಪ್ರಸ್ತುತ ಚಿತ್ರದ ನಿರ್ಮಾಪಕರಾದ ರವೀಂದ್ರ ಹಾಗೂ ಸೈಯ್ಯದ್ ಅಮಾನ್ ತಿಳಿಸಿದ್ದಾರೆ।ಬೆಂಗಳೂರು, ಮುಂಬೈ ಹಾಗೂ ಮುಂತಾದ ಕಡೆ ಚಿತ್ರೀಕರಣವಾದ ಈ ಚಿತ್ರವನ್ನು ಅಗ್ನಿಶ್ರೀಧರ್ ಅರ್ಪಿಸುತ್ತಿದ್ದಾರೆ। 'ಸ್ಲಂಬಾಲ'ನಿಗೆ ಕಥೆ, ಸಂಭಾಷಣೆ ಕೊಡುಗೆ ನೀಡಿರುವ ಅಗ್ನಿಶ್ರೀಧರ್ ನಿರ್ದೇಶಕರಿಗೆ ಚಿತ್ರಕಥೆ ರಚಿಸುವಲ್ಲೂ ನೆರವಾಗಿದ್ದಾರೆ। ಎ.ಸಿ.ಮಹೇಂದರ್ ಛಾಯಾಗ್ರಹಣ,ಅರ್ಜುನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದಿನೇಶ್ ಮಂಗ್ಳೂರ್ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ಶುಭಾಪುಂಜಾ, ಉಮಾಶ್ರೀ, ಗಿರಿಜಾಲೋಕೇಶ್, ಶಶಿಕುಮಾರ್, ಅಚ್ಯುತ, ಧರ್ಮ, ಬಿ.ಸುರೇಶ್, ಸತ್ಯ ಮುಂತಾದವರಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)
1 comment:
ರೀ ಸ್ವಾಮಿ, ಸ್ಲಮ್ಬಾಲ ಅಂತ ಹೆಸರು ಕೊಟ್ಟು ಲೀಲಾವತಿ ಅವರ ಮಗನ ಫೋಟೋ ಹಾಕಿದಿರ,
ವಿಜಯ ಚಿತ್ರ ಹಾಕಿ.
Post a Comment